Karnataka PSI Recruitment Scam: ಸರ್ಕಾರ ಆರೋಪಿ ದಿವ್ಯಾ ರಕ್ಷಣೆ ಮಾಡುತ್ತಿದೆ | Vijay Karnataka

Karnataka PSI Recruitment Scam: ಸರ್ಕಾರ ಆರೋಪಿ ದಿವ್ಯಾ ರಕ್ಷಣೆ ಮಾಡುತ್ತಿದೆ | Vijay Karnataka

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಆರೋಪ ಎದುರಿಸುತ್ತಿರುವ ಕಲಬುರಗಿ ಜಿಲ್ಲೆಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಆರೋಪ ಮಾಡಿದರು. ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು ಸರ್ಕಾರ ಆರೋಪಿ ದಿವ್ಯಾ ರಕ್ಷಣೆ ಮಾಡುತ್ತಿದೆ. ದಿವ್ಯಾ ಹಾಗರಗಿ ಬಿಜೆಪಿಯ ಮಹಿಳಾ ಮುಖಂಡರಾಗಿದ್ದಾರೆ. ಈಗಾಗಲೇ ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ದಿವ್ಯಾ ನಾಪತ್ತೆ ಆಗಿದ್ದಾರೆ. ಕಲಬುರಗಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ದಿವ್ಯಾ ಟಿಕೆಟ್ ಕೂಡ ಕೇಳಿದ್ದರು. ಆಕೆ ಬಿಜೆಪಿ ನಾಯಕಿ ಅಲ್ಲ ಎಂದು ಬಿಜೆಪಿ ವಕ್ತಾರರು ಹೇಳಿದರೂ ಸರ್ಕಾರ ದಿವ್ಯಾ ಅವರನ್ನು ಪ್ರೊಟೆಕ್ಟ್ ಮಾಡುತ್ತಿದೆ ಎಂದು ಆರೋಪ ಮಾಡಿದರು. ದಿವ್ಯಾ ಹಾಗರಗಿ ಸಂಬಂಧಿಸಿದಂತೆ ಪೊಲೀಸರ ಬಳಿ ಸಂಪೂರ್ಣ ಮಾಹಿತಿ ಇದೆ. ಹೀಗಾಗಿ ದಿವ್ಯಾಳನ್ನು ಅರೆಸ್ಟ್ ಮಾಡ್ಲೇ ಬೇಕು. ಇಲ್ಲ ಅಂದ್ರೆ ರಾಜ್ಯದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ. ಈಗಾಗಲೇ 10 ದಿನ ಆಗಿದೆ ದಿವ್ಯಾಗಳನ್ನು ಹಿಡಿದಿಲ್ಲ. ಬಿಜೆಪಿ ಮುಖಂಡ ಆಗಿರುವದಕ್ಕೆ ಹಿಡಿಯೋಕೆ ವಿಳಂಬ ಮಾಡ್ತವ್ರಾ? ಇದರಲ್ಲಿ ಬಿಜೆಪಿ ನಾಯಕರ ಕೈವಾಡ ಇದ್ಯಾ..? ಅದು ಗೊತ್ತಾಗಬೇಕು ಎಂದ‌ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಇಡೀ ದೇಶದಲ್ಲಿ ಬೆಂಗಳೂರು ಅಂದರೆ ಸಿಲಿಕಾನ್ ವ್ಯಾಲ್ಯೂ ಅಂತ ಇತ್ತು. ಸಿಲಿಕಾನ್ ಕ್ಯಾಪಿಟಲ್ ಸಿಟಿ ಅಂತ ಬೆಂಗಳೂರು ಹೆಸರಾಗಿತ್ತು. ಈ ಸರ್ಕಾರದಿಂದ ಭ್ರಷ್ಟಾಚಾರದ ಕ್ಯಾಪಿಟಲ್ ಅಫ್ ಇಂಡಿಯಾ ಅಂತ ಬೆಂಗಳೂರು ಆಗಿದೆ ಎಂದು ಆರೋಪ ಮಾಡಿದರು. #Karnataka #PSIRecruitmentScam #AjaySingh Our Website : https://Vijaykarnataka.com Facebook:   / vijaykarnataka   Twitter:   / vijaykarnataka