ಯಾವ ಇಲಾಖೆಯಲ್ಲಿ ಲಂಚ ತಗೋಳ್ತಾರೋ ಅಲ್ಲಿಂದಲೇ ತನಿಖೆ ಮಾಡಿಸೋದಾ? ಈ ಪರ್ಸೆಟೆಂಜ್ ತನಿಖೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಯಾರು ಲಂಚ ತಗೊಂಡಿದ್ದಾರೆ. ಅವರಿಗೆ ಶಿಕ್ಷೆ ಆಗಲಿ. ಅದು ಬಿಟ್ಟು ಇಲಾಖೆಗಳ ಕಾರ್ಯದರ್ಶಿ ಕೈಯಲ್ಲಿ ಮಾಡಿಸ್ತೀವಿ ಅಂದ್ರೆ ಏನು? ಇದು ಕಣ್ಣೋರೆಸುವ ತಂತ್ರ ಅಲ್ವಾ, ಪ್ರಕರಣ ಮುಚ್ಚಿಹಾಕುವ ಪ್ರಯತ್ನ. ನಾವು ರಾಜ್ಯಪಾಲರಿಗೆ ಭೇಟಿ ಮಾಡಿ ಮನವಿ ಮಾಡಿದ್ದೇವೆ ಎಂದರು. ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ದೂರು ಬಂದಮೇಲೆ ತನಿಖೆ ಮಾಡಬೇಕಲ್ವಾ? ಅಂತ ಸಿದ್ದರಾಮಯ್ಯ ಪ್ರಶ್ನಿಸಿದ್ರು. ಸಿಎಂ ಅವರ ಕಾಲದಲ್ಲೂ ಇತ್ತು ಅಂತಾರೆ, ಹೌದು ಆ ಕಾಲದಲ್ಲೂ ಭ್ರಷ್ಟಾಚಾರ ಇತ್ತು. ಆದರೆ, ಗುತ್ತಿಗೆದಾರರು ಯಾವತ್ತಾದ್ರೂ ಪತ್ರ ಬರೆದಿದ್ದಾರಾ? ಒಂದು ಲಕ್ಷ ಕಂಟ್ರಾಕ್ಟರ್ ಇರೋ ಸಂಘದವರು ಪತ್ರ ಬರೆದಿದ್ದಾರೆ ಎಂದರು. #Siddaramaiah #Tender #BasavarajBommai Our Website : https://Vijaykarnataka.com Facebook: / vijaykarnataka Twitter: / vijaykarnataka